ಯಾದಗಿರಿಸುವರ್ಣ ಗಿರಿ ಟೈಮ್ಸ್

ದೇಶದ‌ ಹೆಮ್ಮೆಯ ರಾಷ್ಟ್ರ ಲಾಂಛನಕ್ಕೆ ಅವಮಾನ.

ಯಾದಗಿರಿ : ದೇಶದ‌ ಹೆಮ್ಮೆಯ ಪ್ರತೀಕವಾದ ರಾಷ್ಟ್ರ ಲಾಂಛನಕ್ಕೆ ಯಾದಗಿರಿಯಲ್ಲಿ ಅವಮಾನ ಮಾಡಲಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ರಾಷ್ಟ್ರಲಾಂಛನ ಅನಾಥವಾಗಿದೆ.

ಯಾದಗಿರಿಯ ವಡಗೇರಾದಲ್ಲಿ ಬೀದಿ ಬದಿ ದೇವಸ್ಥಾನದ ಕಟ್ಟೆ ಮೇಲಿರುವ ಅಶೋಕ ಚಕ್ರದ ಬೃಹತ್ ಲಾಂಛನ, ಕಳೆದ ನಾಲ್ಕೈದು ವರ್ಷಗಳಿಂದ ಬೀದಿಯಲ್ಲೇ ಇದೆ.

1996ರಲ್ಲಿ ಗ್ರಾಮದಲ್ಲಿ 50ರಿಂದ 60 ಸಾವಿರಾರು ರೂಪಾಯಿ ಖರ್ಚು ಮಾಡಿ ಮುಖ್ಯದ್ವಾರಕ್ಕೆ ರಾಷ್ಟ್ರ ಲಾಂಛನ ಅಳವಡಿಸ ಲಾಗಿತ್ತು. ಕಳೆದ ನಾಲ್ಕೈದು ವರ್ಷಗಳ ಹಿಂದೆ ರಸ್ತೆ ಅಗಲೀಕರಣದ ವೇಳೆ ರಾಷ್ಟ್ರ ಲಾಂಛನ ತೆಗೆಯಲಾಗಿತ್ತು. ಅಂದಿನಿಂದ ಇಂದಿನ ವರೆಗೂ ರಾಷ್ಟ್ರ ಲಾಂಛನ ಅನಾಥವಾಗಿ ಬಿದ್ದಿದೆ.

ಲಾಂಛನ ಸುರಕ್ಷಿತವಾಗಿಡದೇ ನಿರ್ಲಕ್ಷ್ಯ ಮಾಡಿ, ರಾಷ್ಟ್ರ ಲಾಂಛನಕ್ಕೆ ಅವಮಾನ ಮಾಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಡಗೇರಾ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ಗೌರವ ಸೂಚಿ ಸುವ ಕೆಲಸ ಮಾಡಬೇಕು ಅಂತಾ ಆಕ್ರೋಶ ಹೊರ ಹಾಕುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button