ಬೆಳಗಾವಿ: ಆಸ್ತಿ ವಿಚಾರಕ್ಕೆ ಸಹೋದರ ಸಂಬಂಧಿಗಳಿಂದಲೇ ಕೊಲೆ.!!

ಬೆಳಗಾವಿ: ಬೆಳಗಾವಿಯ ರಾಯಭಾಗ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಸಹೋದರ ಸಂಬಂಧಿಗಳಿಂದಲೇ ಕೊಲೆ. ಆಸ್ತಿ ವಿಚಾರಕ್ಕೆ ಸಂಬಂಧಿಗಳ ನಡುವೆ ಗಲಾಟೆ. ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬ್ಯಾಂಕ್ ಮ್ಯಾನೆಜರ್ ಸಾವು.
ಚಿಕಿತ್ಸೆ ಫಲಿಸದೇ ಲಕ್ಕಪ್ಪ ಬಬಲ್ಯಾಗೋಳ (37) ಸಾವು. ಬೈಕ್ ಶಾಕ್ ಆಬ್ಜರ್ಬರ್ ಹಾಗೂ ಜಂಬೆಯಿಂದ ಗಂಭೀರವಾಗಿ ಹಲ್ಲೆ. ಫೆ 6 ರಂದು ರಾಯಭಾಗ ತಾಲೂಕಿನ ಹಿಡಕಲ್ ಗ್ರಾಮದ ಬಳಿಯ ತೋಟದಲ್ಲಿ ನಡೆದಿದ್ದ ಹಲ್ಲೆ ಪ್ರಕರಣ. ಬಳಿಕ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ.
ಬಿಮ್ಸ್ ಆಸ್ಪತ್ರೆಯಲ್ಲಿ ಲಕ್ಕಪ್ಪ ಬಬಲ್ಯಾಗೋಳ ಸಾವು. ಆಸ್ತಿ ವಿವಾದ ಹಂಚಿಕೆ ಸಂಬಂಧ ಸಹೋದರ ಸಂಬಂಧಿಗಳ ನಡುವೆ ಬ್ಯಾಂಕ್ ಕೆಲಸ ಮುಗಿಸಿ ವಾಪಸ್ ಬರೋವಾಗ ತೋಟಕ್ಕೆ ಕರೆದುಕೊಂಡು ಹೋಗಿ ಹಲ್ಲೆ.
ನಂತರ ತೋಟದಲ್ಲಿ ಗಲಾಟೆ ವೇಳೆಯಲ್ಲಿ ಜಮಾವಣೆಗೊಂಡ ಸ್ಥಳೀಯರು. ಮೂರು ಜನ ಆರೋಪಗಳನ್ನು ದೇವಾಲಯಲ್ಲಿ ಲಾಕ್ ಮಾಡಿದ ಬಳಿಕ ನಾಲ್ವರು ಆರೋಪಗಳ ವಿರುದ್ಧ ಹಾರೊಗೇರಿ ಠಾಣೆಯಲ್ಲಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು.