ರಾಯಚೂರುಸುವರ್ಣ ಗಿರಿ ಟೈಮ್ಸ್

ಒಂದು ಕೋಟಿಗೂ ಹೆಚ್ಚು ಹಣ ಅವ್ಯವಹಾರ ಮಾಡಿದ ಪಿಡಿಒ ಶಶಿಕಲಾ ಪಾಟೀಲ್: ಕಣ್ಣು ಮುಚ್ಚಿ ಕುಳ್ಳಿತ ಸಿಇಒ

ರಾಯಚೂರು: ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕು ಚಿತ್ತಾಪುರ ಗ್ರಾಮ ಪಂಚಾಯತ್ ಪಿಡಿಒ ಶಶಿಕಲಾ ಪಾಟೀಲ್, ಅವರು ಈ ಹಿಂದೆ ನೀರಲಕೆರೆಯಲ್ಲಿ ಕಾರ್ಯನಿರ್ವಹಿಸುವ ವೇಳೆ ಗ್ರಾಮ ಪಂಚಾಯಿತಿಯಲ್ಲಿ ಬರುವ ಕೇಂದ್ರದ 14 ಮತ್ತು 15ನೇ ಹಣಕಾಸು ಸತತ ನಾಲ್ಕೈದು ವರ್ಷದ ಅನುದಾನವನ್ನು ನುಂಗಿ ನೀರು ಕುಡಿಯುತ್ತಿರುವ ಪಿಡಿಒ.

ಈ ಹಿಂದೆ ಆನೆಹೊಸೂರುನಲ್ಲಿ ಕೂಡ ನುಗ್ಗಿ ನೀರು ಕುಡಿದ ಶಶಿಕಲಾ ಪಾಟೀಲ್, ಇಷ್ಟೆಲ್ಲ ಆಕ್ರಮ ಸಾಬೀತಾದರು ಕ್ರಮ ಕೈಗೊಳ್ಳದ ಸಿಇಒ ರಾಜ್ಯ ರೋಷವಾಗಿ ಇದೀಗ ಚಿತ್ತಾಪುರ ಗ್ರಾಮ ಪಂಚಾಯಿತಿಯಲ್ಲಿ ಕೂಡ ಶಶಿಕಲಾ ಪಾಟೀಲ್ ಅದೇ ಕೆಲಸವನ್ನು ಮುಂದುವರಿಸಿದ್ದಾರೆ. ಈಗ ಕಂಪ್ಲೀಟ್ ಆಗಿ ಲೋಪ ದೋಷ ಸಾಬೀತು ಆಗಿ ವರದಿ ಬಂದರೂ ಕೂಡ ಮೇಲಾಧಿಕಾರಿಗಳಿಂದ ಕ್ರಮಕ್ಕೆ ಮೇನಾವೇಶ ಮಾಡಲಾಗುತ್ತದೆ, ಮನಸೋ ಇಚ್ಛೆಯಿಂದ ರಶೀದಿ ಹಾಕಿ ದಿಲ್ ಪಾವತಿಸಿರುವುದು ತನಿಕೆಯಲ್ಲಿ ಸಾಬೀತು ಆಗಿದೆ. ಈಗ ಸಾಕ್ಷಿ ಸಮೇತ ಸಿಕ್ಕಿಹಾಕಿಕೊಂಡ ಪಿಡಿಒ ಅಕ್ರಮ ವ್ಯಸಗಿದರು ಕೂಡ ಕೆಲಸದಲ್ಲಿ ಮುಂದುವರೆದಿದ್ದಾರೆ.

ತಾಲೂಕು ಪಂಚಾಯಿತಿಯಿಂದ ತನಿಖೆ ನಡೆದು ಇಒ ಬಗ್ಗೆ ವರದಿ ಸಲ್ಲಿಕೆಯಾದರೂ ಯಾವುದೇ ಕ್ರಮ ಕೈಗೊಳ್ಳದ ಜಿಲ್ಲಾ ಪಂಚಾಯತ್ ಸಿಇಒ, ವರದಿ ಸಲ್ಲಿಕೆಯಾಗಿ ಆರು ತಿಂಗಳು ಆದರೂ ಜಿಲ್ಲಾ ಪಂಚಾಯಿತಿಯಿಂದ ಯಾವುದೇ ರಿಪ್ಲೈಯಿಲ್ಲ ಹಾಗಾಗಿ ಆಕ್ರಮಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ. ತಾಲೂಕು ಪಂಚಾಯತಿಯು ಅಮರೇಶ್ ಹಾಗೂ ಸಿಇಒ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

Related Articles

Leave a Reply

Your email address will not be published. Required fields are marked *

Back to top button