ಬೆಳಗಾವಿಸುವರ್ಣ ಗಿರಿ ಟೈಮ್ಸ್

ವಾಟ್ಸಾಪದಲ್ಲಿ ಚರ್ಚೆ ಮಾಡಿದಕ್ಕೆ ರಸ್ತೆ ಕಾಮಗಾರಿ ಮಾಡಿದ ಅಧಿಕಾರಿಗಳು..!!

ವಿಶೇಷ ವರದಿ

ಬೆಳಗಾವಿ: ಮನವಿ, ಹೊರಾಟ, ಚಿರಾಟ ಮಾಡಿದ ನಂತರ ಕಾಮಗಾರಿ ಮಾಡಿದ ಉದಾಹರಣೆಗಳು ಇವೆ ಆದರೆ ಕೇವಲ ವಾಟ್ಸ್ಆಪ್ ದಲ್ಲಿ ಮಾಡಿದ ಚರ್ಚೆಗೆ ರಸ್ತೆ ಕಾಮಗಾರಿ ಮಾಡಿದ್ದು ಬೆಳಕಿಗೆ ಬಂದಿದೆ.

ಹೌದು, ಇಂತಹ ಒಂದು ಕಾಮಗಾರಿ ಆದದ್ದು ಜಿಲ್ಲೆಯ ರಾಯಬಾಗ ತಾಲೂಕಿನ ಲೋಕೋಪಯೋಗಿ ಅಧಿಕಾರಿಗಳು ಕಾಮಗಾರಿ ಮಾಡಿದ್ದಾರೆ. ಆ ಕಾಮಗಾರಿ ಮತ್ಯಾವುದು ಅಲ್ಲಾ ರಾಯಬಾಗ ಮೇಖಳಿ ರಸ್ತೆಯ ಕಾಮಗಾರಿ. !

ತಾಲೂಕಿನಲ್ಲಿ ಒಂದು ವಾಟ್ಸಾಫ್ ಗ್ರುಪ್ ಇದೆ ಈ ಗ್ರುಪ ಹೆಸರು ನ್ಯಾಯದ ಪರ ವಾದ. ಇದರ ಅಡ್ಮಿನ್ ರಾಘವೆಂದ್ರ ಅವಳೆ ಇಂಜೀನಿಯರಿಂಗ ಖಾಸಗಿ ಉದ್ಯೋಗ ಮಾಡುತ್ತಿದ್ದು ತಾಲೂಕಿನಲ್ಲಿ ಎಲ್ಲಾದರೂ ಅಕ್ರಮ ಕೆಲಸ ಸಾಮಜಿಕ ಶಿಕ್ಷಣದ ಕುರಿತು ಇಲ್ಲಿ ಚರ್ಚೆ ಮಾಡುತ್ತಿದ್ದಾರೆ. ಇದರಿಂದ ಕೆಲವೊಂದು ಸಮಸ್ಯೆಗಳು ವಾಟ್ಸಾಪ್ ದಿಂದ ಪರಿಹಾರ ಪಡೆದುಕೊಂಡಿವೆ ಎಂದರೆ ತಪ್ಪಾಗಲಿಕ್ಕಿಲ್ಲಾ.

ಹೊರಾಟ್ ಹಾರಾಟ್ ಮಾಡದೇ ವಾಟ್ಸಾಪದಲ್ಲಿ ಚರ್ಚೆ ಮಾಡಿ ಪರಿಹಾರ ಪಡೆದುಕೊಂಡಿದ್ದಾರೆ. ರಾಯಾಬಾಗದ ಲೋಕೋಪಯೋಗಿ ಅಧಿಕಾರಿಗಳು ಸ್ಪಂದಿಸಿದ್ದಾರೆ. ಅದೇ ರೀತಿ ಇಂತಹ ವಾಟ್ಸಾಪ್ ಗ್ರುಪಗಳು ಇನ್ನಷ್ಟು ಹುಟ್ಟಲಿ ರಾಯಬಾಗ ತಾಲೂಕು ಹಿಂದೂಳಿದ ತಾಲೂಕಿನಿಂದ ಹೊರಗೆ ಬರುತ್ತಾ ಅನ್ನೊದನ್ನು ಕಾದು ನೋಡಬೇಕು, ಅಷ್ಟೇ.

Related Articles

Leave a Reply

Your email address will not be published. Required fields are marked *

Back to top button