ಬೆಳಗಾವಿಸುವರ್ಣ ಗಿರಿ ಟೈಮ್ಸ್

ಉಧ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮ ಕ್ರಮಕ್ಕಾಗಿ ದಾಖಲೆ ಸಮೇತ ಮನವಿ.

ಬೆಳಗಾವಿ: ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿ ಮಾಡದೇ ಅಕ್ರಮವಾಗಿ ಹಣ ತೆಗೆದಿದ್ದು, ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸಮಾಜ ಸೇವಕ ಹಣಮಂತ ಭಿರಡೆ ಮಂಗಳವಾರ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.

ರಾಯಭಾಗ ಗ್ರಾಮೀಣ ಪಂಚಾಯತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಲ್ಲಿ ಅಕ್ರಮವಾಗಿ ಹಣ ತೆಗೆಯಲಾಗಿದೆ. 11/06/2024 ರಂದು ಪೋಟೋ ಮೇಲೆ ಪೋಟೋ ಹಾಕಿ ಕಾಮಗಾರಿಗಳ ಮಾಡಲಾಗಿದೆ. 08/06/2024 ರಂದು ಸಂತೂಬಾಯಿ ದೇವಸ್ಥಾನದ ಹತ್ತಿರ ಕಾಮಗಾರಿ ಮಾಡದೇ ಕೂಲಿಗಳನ್ನು ನಿಲ್ಲಿಸಿ ಪೋಟೋ ಹೊಡೆದು ಆಪ್‌ ಲೋಡ ಮಾಡಿ ಹಣ ತೆಗೆಯಲಾಗಿದೆ. ಅದೇ ರೀತಿ ಸಂತೂಬಾಯಿ ದೇವಸ್ಥಾನದ ಹತ್ತಿರ 11/06/2024 ರಂದು ಮಹಿಳಾ ಕೂಲಿಗಳನ್ನು ನಿಲ್ಲಿಸಿ ಪೋಟೋ ಹೊಡೆದು ಅಪ್‌ ಲೋಡ ಮಾಡಿ ಹಣ ತೆಗೆಯಲಾಗಿದೆ. ಅದೇ ರೀತಿ ಬೈರಯೊಡಿಯಲ್ಲಿ ಗುರುಲಿಂಗ ಪೋಜೇರಿಯವರ ಮನೆ ಮುಂದೆ ಕಾಮಗಾರಿ ಮಾಡದೇ ಕಾಮಗಾರಿ ಆಗಿದೆ ಎಂದು 26-05- 2024 ರಂದು ಹಣ ತೆಗೆಯಲಾಗಿದೆ. 11/06/2024 ರಂದು ಆನೆಬಾಯಿ ಖೋಡಿ ಹತ್ತಿರ ಗಣಪತಿ ಹವಾಲ್ದಾರ ಮನೆಯ ಮುಂದೆ ಸುಮ್ಮನೆ ನಿಂತು ಪೋಟೋ ಹಾಕಿ ಹಣ ತೆಗೆದಿದ್ದಾರೆ.

ಈ ಕುರಿತು ಮಾತನಾಡಿರುವ ಹಣಮಂತ ಭಿರಡೆ ಕೇವಲ ನಾಲ್ಕೈದು ದಿನಗಳಲ್ಲಿ ಇಷ್ಟು ಅಕ್ರಮ ಮಾಡಿದ್ದಾರೆಂದರೆ ಇನ್ನು ಎಷ್ಟು ಅಕ್ರಮ ಇದರಲ್ಲಿ ಇರಬಹುದು ಎನ್ನುತ್ತಾರೆ. ಆದ್ದರಿಂದ ನಾನು ನನಗೆ ಸಿಕ್ಕ ದಾಖಲಾತಿಗಳನ್ನು ಮನವಿಯೊಂದಿಗೆ ಕ್ರಮಕ್ಕಾಗಿ ಮನವಿ ನೀಡಿದ್ದು ಅವುಗಳನ್ನು ಗಮನಿಸಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

Related Articles

Leave a Reply

Your email address will not be published. Required fields are marked *

Back to top button