ಶಿವಮೊಗ್ಗಸುವರ್ಣ ಗಿರಿ ಟೈಮ್ಸ್

ವರದಕ್ಷಿಣೆಗಾಗಿ ಗಂಡನ ಮನೆಯವರಿಂದಲೇ ವಿಷ ಉಣಿಸಿದ ಆರೋಪ: ಪತ್ನಿ ಮೃತ್ಯು, ಮಗವಿನ ಸ್ಥಿತಿ ಚಿಂತಾಜನಕ

ಶಿವಮೊಗ್ಗ : ವರದಕ್ಷಿಣೆಗಾಗಿ ಗಂಡನ ಮನೆಯವರು ಮಹಿಳೆ ಹಾಗೂ ಆಕೆಯ 5 ತಿಂಗಳ ಮಗುವಿಗೆ ವಿಷ ಉಣಿಸಿದ್ದಾರೆ ಎನ್ನಲಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಸಿದ್ಲಿಪುರ ಗ್ರಾಮದಲ್ಲಿ ವರದಿಯಾಗಿದೆ.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಸ್ತೂರಿ(25) ಎಂಬ ಮಹಿಳೆ ಮೃತಪಟ್ಟಿದ್ದು, ಐದು ತಿಂಗಳ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಗಂಡನ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದ್ದು, ಮೃತ ಪತ್ನಿ ಹಾಗೂ ಮಗುವಿಗೆ ಅವರ ಗಂಡನ ಮನೆಯವರೇ ವಿಷ ಉಣಿಸಿದ್ದಾರೆ ಎಂದು ಮೃತ ಕಸ್ತೂರಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ ಎನ್ನಲಾಗಿದೆ.

ಮೃತ ಕಸ್ತೂರಿ ಕುಟುಂಬಸ್ಥರು, ಆಕೆಯ ಪತಿ ಮಂಜುನಾಥ್, ಅತ್ತೆ ಉಮಾ, ಮೈದುನ ಮುತ್ತು ವಿರುದ್ಧ ವಿಷ ಉಣಿಸಿರುವ ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸರು ಆರೋಪಿ ಮಂಜುನಾಥ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button