ಜಮೀನಲ್ಲಿ ಅಕ್ರಮವಾಗಿ ಗಾಂಜಾ ಬೆಳೆ: ದಿಢೀರ್ ದಾಳಿ ನಡೆಸಿ ಗಾಂಜಾ ವಶಕ್ಕೆ.

ಕುಷ್ಟಗಿ: ಅಕ್ರಮವಾಗಿ ಜಮೀನ್ ಒಂದರಲ್ಲಿ ಹಲವಾರು ದಿನಗಳಿಂದ ಗಾಂಜಾ ಗಿಡಗಳನ್ನು ಬೆಳಸಿದ್ದ ತಾಲೂಕಿನ ತಾವರಗೇರಾ ಠಾಣೆಯ ಪೊಲೀಸರು ಖಚಿತ ಮಾಹಿತಿ ಪಡೆದುಕೊಡು ದಿಢೀರ್ ಜಮೀನಿಗೆ ತೆರಳಿ ದಾಳಿ ನಡೆಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ,ಗಂಗಾವತಿ ವಿಭಾಗದ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಕುಷ್ಟಗಿ ಸಿಪಿಐ ಯಶವಂತ ಬೀಸನಳ್ಳಿ ನೇತೃತ್ವದಲ್ಲಿ ಒಂದು ತಂಡ ರಚನೆ ಮಾಡಿ ತಾವರಗೇರಾ ಪೊಲೀಸ್ ಠಾಣೆಯ ಪಿಎಸಐ ನಾಗರಾಜ ಕೊಟಗಿ ಮತ್ತು ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮ್ಯಾದರಡೊಕ್ಕಿ ಗ್ರಾಮದ ಸರ್ವೇ ನಂ 104 ರ ಜಮೀನಿನಲ್ಲಿ ಖತರ್ನಾಕ ಆರೋಪಿಯು, ತೆಂಗಿನ ಗಿಡ( ಕಲ್ಪವೃಕ್ಷ) ಜೊತೆಗೆ ಗಾಂಜಾ ಗಿಡವನ್ನು ಬೆಳೆಸಿ ಮಾರಾಟ ಮಾಡಲು ಯತ್ನಿಸಿದ್ದು ಈ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆಯೇ ಸ್ಥಳೀಯ ಪಿಎಸ್ ಐ ಹಾಗೂ ಸಿಬ್ಬಂದಿಗಳಾದ ಬಸವರಾಜ ಇಂಗಳದಾಳ, ಮಹ್ಮದ್ ರಫೀ, ವಿರೇಶ, ಶರಣಬಸವ, ಕರಿಯಪ್ಪ ಇವರೊಂದಿಗೆ ಗೆಜೆಟೆಡ್ ಅಧಿಕಾರಿ ಅರುಣಾ ಕುಮಾರಿ ಯೊಂದಿಗೆ ಜಮೀನಿಗೆ ತೆರಳಿ ಗಾಂಜಾ ಗಿಡವನ್ನು ಕಿತ್ತು ಹಾಕುವ ಮೂಲಕ ಪ್ರಕರಣ ಪತ್ತೆ ಹಚ್ಚಿದ್ದು, ಆರೋಪಿಯ ಪರಾರಿಯಾಗಿದ್ದಾನೆ, ಆತನ ಬಲೆಗೆ ಜಾಲ ಬೀಸಿದ್ದಾರೆ. ಒಟ್ಟು 9 ಕೆಜಿ 800 ಗ್ರಾಂ ತೂಕದ 5 ಹಸಿ ಗಾಂಜಾ ಗಿಡಗಳನ್ನು ಜಪ್ತಿಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.